ವಿವೇಕಾನಂದರ್ ಇಲ್ಲಮ್ ಭಾರತದ ತಮಿಳುನಾಡು ರಾಜ್ಯದ ಚೆನ್ನೈನಲ್ಲಿರುವ ಒಂದು ಐತಿಹಾಸಿಕ ಕಟ್ಟಡವಾಗಿದೆ. ಇದನ್ನು 1842 ರಲ್ಲಿ ಫ್ರೆಡೆರಿಕ್ ಟ್ಯೂಡರ್ ನಿರ್ಮಿಸಿದರು. ಭಾರತೀಯ ಸಂತ ಸ್ವಾಮಿ ವಿವೇಕಾನಂದರು 1897 ರಲ್ಲಿ ಚೆನ್ನೈಗೆ ಭೇಟಿ ನೀಡಿದಾಗ ಈ ಕಟ್ಟಡದಲ್ಲಿ ತಂಗಿದ್ದರು ಮತ್ತು ನಂತರ ಅದನ್ನು ಅವರ ಗೌರವಾರ್ಥವಾಗಿ ಮರುನಾಮಕರಣ ಮಾಡಲಾಯಿತು. ಪ್ರಸ್ತುತ ಇದನ್ನು ರಾಮಕೃಷ್ಣ ಮಠವು ನಿರ್ವಹಿಸುತ್ತದೆ ಮತ್ತು ವಿವೇಕಾನಂದರ ಜೀವನದ ಮೇಲಿನ ಪ್ರದರ್ಶನವನ್ನು ಹೊಂದಿದೆ. == ಇತಿಹಾಸ == 1842 ರಲ್ಲಿ, ಫ್ರೆಡ್ರಿಕ್ ಟ್ಯೂಡರ್ ಅವರು ಐಸನ್ನು ಸಂಗ್ರಹಿಸುವ ಸೌಲಭ್ಯವಾಗಿ ಬಂಗಾಳ ಕೊಲ್ಲಿಗೆ ಎದುರಾಗಿ ಈ ಕಟ್ಟಡವನ್ನು ನಿರ್ಮಿಸಿದರು. 1880 ರಲ್ಲಿ ಈ ವ್ಯವಹಾರ ಕುಸಿಯಿತು ಮತ್ತು ಕಟ್ಟಡವನ್ನು ಮದ್ರಾಸ್ ಹೈಕೋರ್ಟ್‌ನಲ್ಲಿ ವಕೀಲರಾಗಿದ್ದ ಬಿಳಿಗಿರಿ ಅಯ್ಯಂಗಾರ್‌ಗೆ ಮಾರಾಟ ಮಾಡಲಾಯಿತು. ಅಯ್ಯಂಗಾರ್ ಅವರು ಮನೆಗೆ ಹೊಸರೂಪ ನೀಡಿದರು ಮತ್ತು ಮದ್ರಾಸ್ ಹೈಕೋರ್ಟಿನಲ್ಲಿ ತಮ್ಮ ಸ್ನೇಹಿತ ಮತ್ತು ನ್ಯಾಯಾಧೀಶರ ಹೆಸರಿನಲ್ಲಿ ಕ್ಯಾಸಲ್ ಕರ್ನನ್ ಎಂದು ಹೆಸರಿಸಿದರು. ಸ್ವಾಮಿ ವಿವೇಕಾನಂದರು 1897 ರಲ್ಲಿ ಮದ್ರಾಸಿಗೆ ಭೇಟಿ ನೀಡಿದಾಗ, ಅವರು 6 ಮತ್ತು 14 ಫೆಬ್ರವರಿ 1897 ರ ನಡುವೆ ಕಟ್ಟಡದಲ್ಲಿ ತಂಗಿದ್ದರು. ನಂತರ, ರಾಮಕೃಷ್ಣ ಮಠವು 1897 ರಿಂದ 1906 ರವರೆಗೆ ಕಟ್ಟಡದಿಂದ ಕಾರ್ಯನಿರ್ವಹಿಸಿತು. 1963 ರಲ್ಲಿ, ಸ್ವಾಮಿ ವಿವೇಕಾನಂದರ ಜನ್ಮ ಶತಮಾನೋತ್ಸವದಂದು, ತಮಿಳುನಾಡು ಸರ್ಕಾರವು ಈ ಕಟ್ಟಡವನ್ನು 'ವಿವೇಕಾನಂದರ ಇಲ್ಲಂ' ಅಂದರೆ ತಮಿಳಿನಲ್ಲಿ 'ವಿವೇಕಾನಂದ ಮನೆ' ಎಂದು ಮರುನಾಮಕರಣ ಮಾಡಿತು. 1997 ರಲ್ಲಿ, ತಮಿಳುನಾಡು ಸರ್ಕಾರವು ಕಟ್ಟಡವನ್ನು ರಾಮಕೃಷ್ಣ ಮಠಕ್ಕೆ ಬಾಡಿಗೆಗೆ ನೀಡಿತು ಮತ್ತು ಪ್ರಸ್ತುತ ಇದು ಸ್ವಾಮಿ ವಿವೇಕಾನಂದರ ಜೀವನದ ಮೇಲಿನ ಪ್ರದರ್ಶನವನ್ನು ಹೊಂದಿದೆ. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == ., ,